7.30.2009

ಶೋಭಾ ಲೋಲನಾಥ್ ಅವರಿಗೆ "ಒನಕೆ ಓಬವ್ವ ಪ್ರಶಸ್ತಿ"



ಶೋಭಾ ಲೋಲನಾಥ್ ಅವರಿಗೆ

"ಒನಕೆ ಓಬವ್ವ ಪ್ರಶಸ್ತಿ"


ಬೆಂಗಳೂರು: ಸಿನಿಮಾ ಹಾಗೂ ಟೆಲಿವಿಷನ್ ನಟಿ ಶೋಭಾ ಎಂ. ಲೋಲನಾಥ್ ಅವರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೋರಾಟ ನಡೆಸಿ ಸಾಧನೆ ಮಾಡಿರುವ ಇಪ್ಪತ್ತು ಮಹಿಳೆಯರು ಕನರ್ಾಟಕ ಸಹೃದಯರ ಸೇವಾ ಪ್ರತಿಷ್ಠಾನ ಕೊಡಮಾಡುವ "ಒನಕೆ ಓಬವ್ವ" ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರತಿಷ್ಠಾನವು ನೀಡುವ "ಆದರ್ಶ ದಂಪತಿಗಳು" ಪ್ರಶಸ್ತಿಗೆ ಬಿ.ಎಲ್. ಭಾಗ್ಯಲಕ್ಷ್ಮಿ ಹಾಗೂ ನಾರಾಯಣ ಮೂತರ್ಿ ವೈ.ಜಿ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 2 (ಭಾನುವಾರ)ರಂದು ಉದ್ಯಾನನಗರಿಯ ಎನ್.ಆರ್.ಕಾಲೋನಿಯಲ್ಲಿರುವ ಬಿ.ಎಂ.ಶ್ರೀ ಕಲಾ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ. ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಡಾ. ಕಮಲಾ ಹಂಪನ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಪ್ರೇಮಾ ಭಟ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸತ್ಯನಾರಾಯಣ ಹಾಗೂ ಕೈಗಾರಿಕೋದ್ಯಮಿಯಾದ ಮೋಹನ್ ಕೆ. ಹಿರೇಗೌಡರು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ:

"ಒನಕೆ ಓಬವ್ವ ಪ್ರಶಸ್ತಿ":

1. ಶೋಭಾ ಎಂ. ಲೋಲನಾಥ್ (ಜನಪ್ರಿಯ ಸಿನಿಮಾ ಹಾಗೂ ಕಿರುತೆರೆ ನಟಿ); 2. ಪ್ರೋ. ಬಿ. ನಾರಾಯಣಮ್ಮ (ಸಾಹಿತ್ಯ ಕ್ಷೇತ್ರ); 3. ಡಾ. ಎನ್. ನಂದಿನಿ (ಶಿಕ್ಷಣ ಕ್ಷೇತ್ರ); 4. ಲಲಿತಾ ಮೇರಿ (ಹೋರಾಟಗಾತರ್ಿ); 5. ಪುಷ್ಪಾ ರಮೇಶ್ (ಸಮಾಜ ಸೇವೆ); 6. ಜಿ. ಪದ್ಮಾವತಿ (ಸುಗಮ ಸಂಗೀತ); 7. ಡಾ. ಇಸಬೆಲ್ಲಾ ಎಸ್. ಜೀವಿಯರ್ (ಮಾನವ ಹಕ್ಕುಗಳ ಸೇವೆ); 8. ರಾಧಾ ಕುಲಕಣರ್ಿ (ಶಿಕ್ಷಣ ಕ್ಷೇತ್ರ); 9. ಬ್ರಹ್ಮಕುಮಾರಿ ಭಾರತಿ (ಧಾಮರ್ಿಕ ಕ್ಷೇತ್ರ); 10. ಕೆ. ಪಲ್ಲವಿ (ಕ್ರೀಡಾ ಕ್ಷೇತ್ರ); 11. ರತ್ನ ಹಾಲಪ್ಪಗೌಡ (ಚುಟುಕು ಸಾಹಿತಿ); 12. ಹೊನ್ನಮ್ಮ ಸೋಮಲಿಂಗಪ್ಪ ಚಂದಾಪುರ (ಸಂಘಟನೆ); 13. ಸ್ವಾತಿ ಪಿ. ಭಾರದ್ವಾಜ್ (ನೃತ್ಯ ಕ್ಷೇತ್ರ); 14. ಎನ್. ಗೌರಮ್ಮ ಮೂತರ್ಿ (ಸಮಾಜ ಸೇವೆ); 15. ವಿಜಯಾ (ಶಿಕ್ಷಣ ಕ್ಷೇತ್ರ); 16. ಅಂಬುಜಾಕ್ಷಿ ರೆಡ್ಡಿ (ಸಂಘಟನೆ); 17. ಲಕ್ಷ್ಮೀಕಾಂತಮ್ಮ (ಸಮಾಜ ಸೇವೆ); 18. ಬಿ.ಆರ್. ಭಾಗ್ಯ ರಂಗನಾಥನ್ (ಶಿಕ್ಷಣ ಮತ್ತು ನಿರ್ವಹಣೆ); 19. ರೇಖಾ ಜಿ. ಹೆಗ್ಗಡೆ (ಸಾಧನ ಮಹಿಳೆ); 20. ಟಿ.ಗಿರಿಜಾ (ಸಾಹಿತ್ಯ)

"ಆದರ್ಶ ದಂಪತಿಗಳು"

ಶ್ರೀಮತಿ ಬಿ.ಎಲ್. ಭಾಗ್ಯಲಕ್ಷ್ಮಿ ಹಾಗೂ ಶ್ರೀ ನಾರಾಯಣ ಮೂತರ್ಿ ವೈ.ಜಿ.