9.12.2011

ವರ್ಷಿಣಿಯ ಕಥಾಕೀರ್ತನ


ವರ್ಷಿಣಿಯ ಕಥಾಕೀರ್ತನ

"ಧನುರ್ಭಂಜನ" ಕಥಾಕೀರ್ತನ

ಕಥಾಕೀರ್ತನಗಾರ್ತಿ: ವರ್ಷಿಣಿ ವಿಜಯ್

ದಿನಾಂಕ: 13ನೇ ಸೆಪ್ಟೆಂಬರ್, 2011 (ಮಂಗಳವಾರ)

ಸಮಯ: ಸಂಜೆ 6.00ಕ್ಕೆ

ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ
(ಹಳೆ ಎನ್.ಎಸ್.ವಿ.ಕೆ. ಶಾಲೆ ಆವರಣ)
7 ನೇ ಹಂತ, ಜಯನಗರ, ಬೆಂಗಳೂರು


ವರ್ಷಿಣಿ ವಿಜಯ್ ಪರಿಚಯ:

ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ತನ್ನ ಅಜ್ಜ ಪ್ರೋ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಾಥಾ ಕೀರ್ತನ ವಿದ್ಯೆಯಲ್ಲಿ ಪಾರಂಗತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಹರಿಕಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಈಗ ಹೊಸ ತಲೆಮಾರಿನ ಯುವಕ-ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನವಾದ ರೀತಿಯ ಕಥಾ ವಿವರಣೆಯ ಮೂಲಕ "ಧನುರ್ಭಂಜನ" ಕೀರ್ತನಾ ಕಾರ್ಯಕ್ರಮ ನೀಡಲು ಆರಂಭಿಸಿದ್ದಾರೆ. ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ವರ್ಷಿಣಿ ಮಾಡಿದ್ದಾರೆ. ಆ ನಿಟ್ಟಿನಲ್ಲಿ "ಧನುರ್ಭಂಜನ" ಮೊದಲ ಹೆಜ್ಜೆಯಾಗಿದೆ.


ಧನ್ಯವಾದಗಳು
ಶೋಭಾ ಎಂ. ಲೋಲನಾಥ್
ಮೊಬೈಲ್: 9845339262